Tuesday, January 17, 2012

ಶಾಂತ ಮನದಲ್ಲಿ ನೂರಾರು ಆವೇಗ ಕಿಚ್ಚೆಬ್ಬಿಸಿದೆ
ಭಾವನೆಯ ತಳಹದಿ ಹೊಕ್ಕು ನೆಲೆಸಿದೆ
ಎಂದೋ ಮರೆತ ನೋವು ನೆನಪಾಗಿದೆ
ಮನವಿಂದು ತಾನಾಗೆ ನೋವಿನ ಎಳೆಯ ಬಿಚ್ಚಿದೆ
ಪಳೆಯುಳಿಕೆಗೂ ಜೀವ ಬಂದಿದೆ
ಮತ್ತದೇ ಚರ್ಮ ಮಾಂಸ ರಕ್ತ ಮೂಡುತ್ತಿದೆ
ಅಕ್ಶಿಪಟಲ ಹರಿದೇ ಹೋಗುವಂತೆ ಮನಸು ಮರುಗುತ್ತಿದೆ
ಹೇಗೆ ಸಮಾಧನಿಸಲಿ ಒಂಟಿಯಾಗಿ ನಾನಿಲ್ಲಿ

No comments:

Post a Comment