ಶಾಂತ ಮನದಲ್ಲಿ ನೂರಾರು ಆವೇಗ ಕಿಚ್ಚೆಬ್ಬಿಸಿದೆ
ಭಾವನೆಯ ತಳಹದಿ ಹೊಕ್ಕು ನೆಲೆಸಿದೆ
ಎಂದೋ ಮರೆತ ನೋವು ನೆನಪಾಗಿದೆ
ಮನವಿಂದು ತಾನಾಗೆ ನೋವಿನ ಎಳೆಯ ಬಿಚ್ಚಿದೆ
ಪಳೆಯುಳಿಕೆಗೂ ಜೀವ ಬಂದಿದೆ
ಮತ್ತದೇ ಚರ್ಮ ಮಾಂಸ ರಕ್ತ ಮೂಡುತ್ತಿದೆ
ಅಕ್ಶಿಪಟಲ ಹರಿದೇ ಹೋಗುವಂತೆ ಮನಸು ಮರುಗುತ್ತಿದೆ
ಹೇಗೆ ಸಮಾಧನಿಸಲಿ ಒಂಟಿಯಾಗಿ ನಾನಿಲ್ಲಿ
No comments:
Post a Comment